ಪ್ರಶ್ನೆ: ನನ್ನ ಹತ್ತಿರ ಇರುವ ಜನರು ನನ್ನ ಕರ್ಮಕ್ಕೆ ಕೊಡುಗೆ ನೀಡುತ್ತಾರೆಯೇ? ಹೌದು ಎಂದಾದರೆ, ನಾನು ಇದನ್ನು ಹೇಗೆ ಎದುರಿಸುವುದು?

ಸದ್ಗುರು: ನಿಮ್ಮ ಕುಟುಂಬವನ್ನು ಸ್ವಚ್ಛಗೊಳಿಸಬೇಕಾಗಿದೆ ಎಂದು ಭಾವಿಸಬೇಡಿ! ಯಾರ ಕರ್ಮ ಯಾರು ಅನುಭವಿಸುತ್ತಾರೋ ಯಾರಿಗೆ ಗೊತ್ತು. ಬಹುಶಃ ಅವರು ಬೇರೆ ಏನನ್ನೋ ಹೇಳಬಹುದು! ನಿಮ್ಮ ಕುಟುಂಬ ಕೆಟ್ಟದಾಗಿದೆ ಎಂದು ನೀವು ಭಾವಿಸಿದರೆ - ಅವರು ಹಾಗೆ ಆಗಿರಬಹುದು, ಆದರೆ ಅವರು ಹಾಗೆಯೇ ಉಳಿಯದಿರಬಹುದು. ಅವರು ಚಂದ್ರನಂತೆ ಹಂತಗಳನ್ನು ಹೊಂದಿದ್ದಾರೆ. ಅವರಿಗೆ ಆಹ್ಲಾದಕರ ಮುಖಗಳಿವೆ ಮತ್ತು ಅಹಿತಕರ ಮುಖಗಳಿವೆ. ಕುಟುಂಬದಲ್ಲಿ ಜನರು ಒಟ್ಟಿಗೆ ನಿಕಟವಾಗಿ ವಾಸಿಸುವುದರಿಂದ ಹೀಗಾಗುತ್ತದೆ.

ನಿಮ್ಮ ಜೀವನ, ನಿಮ್ಮ ಜವಾಬ್ದಾರಿ

ನಿಮ್ಮ ಜೀವನದಲ್ಲಿ ಏನೇ ನಡೆದರೂ ಅದು ನಿಮ್ಮ ಜವಾಬ್ದಾರಿ. ಅಂದರೆ ಅದು ನಿಮ್ಮ ಕರ್ಮ, ನಿಮ್ಮ ಕೆಲಸ. ನೀವು ಆಧ್ಯಾತ್ಮಿಕ ಹಾದಿಯಲ್ಲಿರುವಾಗ ಮತ್ತು ನೀವು "ಕರ್ಮ" ಎಂಬ ಪದವನ್ನು ಹೇಳಿದಾಗ ಅದು ಯಾವಾಗಲೂ ನಿಮ್ಮನ್ನು ಉಲ್ಲೇಖಿಸಬೇಕು. ಯಾರಾದರೂ ಏನಾದರೂ ಕೆಟ್ಟದ್ದನ್ನು ಅನುಭವಿಸುತ್ತಿದ್ದಾರೆ ಅದು ಅವನ ಅಥವಾ ಅವಳ ಕರ್ಮ ಎಂದು  ನಿರ್ಣಯಿಸುವುದು ಮತ್ತು  ಭಾವಿಸುವುದು ಸಂಪೂರ್ಣವಾಗಿ ತಪ್ಪು. ನೀವು ನಿಮ್ಮ ಮೂಲಭೂತ ಮಾನವೀಯತೆಯನ್ನು ಕಳೆದುಕೊಳ್ಳುತ್ತೀರಿ. ಬೇರೊಬ್ಬರ ಕರ್ಮ ಎಂದಿಗೂ ನಿಮ್ಮ ವ್ಯವಹಾರವಲ್ಲ. ಇನ್ನೊಬ್ಬ ಮನುಷ್ಯನಿಗೆ ಅಹಿತಕರವಾದ ಏನಾದರೂ ಸಂಭವಿಸುವುದನ್ನು ನೀವು ನೋಡಬೇಕಾಗುವುದು ನಿಮ್ಮ ಕರ್ಮ.

ಏನೇ ಆಗಲಿ, ಏನೇ ಆದರೂ ಅದು ನೀವೇ. ಅದು ನಿಮ್ಮ ಜೀವನದಲ್ಲಿ ಸಂಭವಿಸುತ್ತದೆ, ಆದ್ದರಿಂದ ಅದು ನಿಮ್ಮ ಕರ್ಮ.ನಿಮ್ಮ ಸುತ್ತ ಬಳಲುತ್ತಿರುವ ಜನರಿದ್ದಾರೋ ಅಥವಾ ಆನಂದದಿಂದಿರುವ ಜನರಿದ್ದಾರೋ, ಅದು ನಿಮ್ಮ ಕರ್ಮ.

"ಬೇರೆಯವರ ಕರ್ಮದ ಬಗ್ಗೆ ಮಾತನಾಡಲು ಶುರು ಮಾಡಿದಾಗಲೇ, ನೀವು ಒಂದು ದುಷ್ಟ ಶಕ್ತಿಯಾಗಿ ಮಾರ್ಪಡುತ್ತೀರಿ. ದುಷ್ಟತೆ ಎಂದರೆ ಯಾವಾಗಲೂ ಉದ್ದೇಶಪೂರ್ವಕವಾಗಿಯೇ ಇರಬೇಕೆಂದಿಲ್ಲ. ದುಷ್ಟತೆ ಎಂದರೆ ನಿಮ್ಮ ಸ್ಥಿತಿ ಇಂಥದ್ದೇ ಆಗಿದೆ - ನೀವು ಏನೇ ಮಾಡಿದರೂ, ಅದು ನಿಮ್ಮ ಸುತ್ತಮುತ್ತಲಿನ ಜನರಿಗೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ. ಬೇರೆಯವರ ಕರ್ಮದ ಬಗ್ಗೆ ಯೋಚಿಸಲು ಪ್ರಾರಂಭಿಸಿದ ಕ್ಷಣದಿಂದಲೇ, ನೀವು ಆ ದಿಕ್ಕಿನಲ್ಲಿ ಸಾಗಲು ಪ್ರಾರಂಭಿಸುತ್ತೀರಿ."

ಇದನ್ನೇ ನಾವು ಆಧ್ಯಾತ್ಮಿಕತೆಯಲ್ಲಿ ಸರಿಪಡಿಸಲು ಪ್ರಯತ್ನಿಸುತ್ತಿರೋದು , ಏನೇ ಆಗಲಿ ,ಏನೇ ಸಂಭವಿಸಿದರೂ ಅದು ನಿಮ್ಮಿಂದಲೇ ಎಂದು ಅರಿತುಕೊಳ್ಳಬೇಕು.  ಇದು ನಿಮ್ಮ ಜೀವನದಲ್ಲಿ ಸಂಭವಿಸುತ್ತದೆ, ಆದ್ದರಿಂದ ಇದು ನಿಮ್ಮ ಕರ್ಮ. ನಿಮ್ಮ ಸುತ್ತ ಬಳಲುತ್ತಿರುವ ಜನರಿದ್ದಾರೋ ಅಥವಾ ಆನಂದದಿಂದಿರುವ ಜನರಿದ್ದಾರೋ, ಅದು ನಿಮ್ಮ ಕರ್ಮ.

ಆದ್ದರಿಂದ ನಿಮ್ಮ ಕುಟುಂಬದಿಂದ ಬರುವ ಕರ್ಮದ ಬಗ್ಗೆ ಚಿಂತಿಸಬೇಡಿ - ಅಂತಹದ್ದೇನೂ ಇಲ್ಲ."ಕುಟುಂಬ" ಅನ್ನೋದು ಇರೋದು ನಿಮ್ಮ ಮನಸ್ಸಿನಲ್ಲಿ ಮಾತ್ರ. ನಿಮ್ಮ ಕುಟುಂಬದವರು ಯಾರು ಮತ್ತು ಯಾರು ಅಲ್ಲ, ನಿಮಗೆ ಯಾರು ಪ್ರಿಯರು ಮತ್ತು ಯಾರು ಅಲ್ಲ ಎಂಬ ಕಲ್ಪನೆಯು ಸಂಪೂರ್ಣವಾಗಿ ನಿಮ್ಮ ಮನಸ್ಸಿನಲ್ಲಿಯೇ ಸೃಷ್ಟಿಯಾಗಿದೆ.ನಿಮಗೆ ಮನಸ್ಸು ಇಲ್ಲದಿದ್ದರೆ ಕುಟುಂಬ ಎಂಬ ಪರಿಕಲ್ಪನೆಯೇ ಇರುತ್ತಿರಲಿಲ್ಲ. ಅಂದರೆ ಅವು ನಿಮ್ಮ ಕೆಲಸ , ನಿಮ್ಮ ಕರ್ಮ.ನಿಮ್ಮ ಜೀವನದಲ್ಲಿ ಏನೇ ನಡೆದರೂ ಅದು ನಿಮ್ಮಿಂದಲೇ ಎಂದು ನೀವು ಅರಿತುಕೊಳ್ಳಬೇಕು. ಒಮ್ಮೆ ನೀವು ಅದನ್ನು ಅರಿತುಕೊಂಡರೆ, ನೀವು ಒಬ್ಬ ವ್ಯಕ್ತಿಯಾಗುತ್ತೀರಿ.ಇಲ್ಲದಿದ್ದರೆ, ನೀವು ಚದುರಿದ ಸ್ಥಿತಿಯಲ್ಲಿಯೇ ಉಳಿಯುತ್ತೀರಿ.ಜನರು ತುಂಬಾ ಚದುರಿಹೋಗಿರುವುದರಿಂದ, ತಮ್ಮ ಸುತ್ತಲಿನ ಅನೇಕ ವಸ್ತುಗಳೊಂದಿಗೆ ಗುರುತಿಸಲ್ಪಟ್ಟಿರುವುದರಿಂದ, ಅವರು ತಮ್ಮನ್ನು ತಾವು ಒಂದು  ಸಮಗ್ರತೆಯಲ್ಲಿ ಒಟ್ಟುಗೂಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ.ಒಮ್ಮೆ ಅದು ಸಂಭವಿಸಿದಾಗ, ನೀವು ಹುಡುಕುತ್ತಿರುವುದು ಕ್ಷಣಮಾತ್ರದಲ್ಲಿ ನಿಮ್ಮದಾಗಬಹುದು.