Main Centers
International Centers
India
USA
Wisdom
FILTERS:
SORT BY:
ಒತ್ತಡ ಉಂಟಾಗುವುದು ನಿರ್ದಿಷ್ಟ ಸನ್ನಿವೇಶದಿಂದಾಗಲ್ಲ. ಒತ್ತಡ ಉಂಟಾಗುವುದು ನಿಮ್ಮದೇ ಜೀವವ್ಯವಸ್ಥೆಯನ್ನು ನಿಭಾಯಿಸಲು ನೀವು ಅಸಮರ್ಥರಾಗಿರುವುದರಿಂದ.
ಹೊಟ್ಟೆಕಿಚ್ಚು ಮತ್ತು ಮಾತ್ಸರ್ಯಗಳ ಮೂಲಭೂತ ಸ್ವರೂಪ ಕೊರತೆಯ ಭಾವನೆ. ನೀವು ನಿಜವಾಗಿಯೂ ಆನಂದಭರಿತರಾಗಿದ್ದರೆ ನೀವು ಯಾರ ಮೇಲೂ ಅಸೂಯೆ ಪಡುವುದಿಲ್ಲ.
ನೀವು ನಿಮ್ಮೊಳಗೆ ಹೇಗಿದ್ದೀರಿ ಎಂಬುದನ್ನು ಸನ್ನಿವೇಶಗಳು ನಿರ್ಧರಿಸದಿದ್ದರೆ, ಬದಲಿಗೆ ಸನ್ನಿವೇಶಗಳು ಹೇಗಿರಬೇಕೆಂದು ನೀವು ನಿರ್ಧರಿಸಿದರೆ, ಅದುವೇ ಯಶಸ್ಸು.
ನಿಮಗೆ ಬೇಕೆಂದರೆ ಈ ಕ್ಷಣವೇ ನೀವು ಸಂತೋಷಭರಿತರಾಗಬಹುದು. ನೀವು ಆ ಆಯ್ಕೆಯನ್ನು ಮಾಡಬೇಕಷ್ಟೆ.
ನಮ್ಮೆಲ್ಲರಿಗೂ ಆನಂದದಿಂದ ಬದುಕುವ ಮತ್ತು ಅಂತರಂಗದ ಒಳಿತನ್ನು ಹೊಂದುವ ಸಾಮರ್ಥ್ಯವಿದೆ – ಅದಕ್ಕೆ ನಾವು ನಮ್ಮೊಳಗೆ ಸರಿಯಾದ ಪರಿಸರವನ್ನು ನಿರ್ಮಿಸಿಕೊಳ್ಳಬೇಕಷ್ಟೆ.
ನೀವು ನಶ್ವರರು ಎಂಬ ಅರಿವು ನಿಮ್ಮಲ್ಲಿ ನಿರಂತರವಾಗಿದ್ದರೆ ಮಾತ್ರ ನೀವು ನಿಜವಾಗಿಯೂ ಪ್ರಜ್ಞಾಪೂರ್ವಕರಾಗಿದ್ದು ಜೀವನದ ಪ್ರತಿ ಕ್ಷಣವನ್ನೂ ಆನಂದಿಸಬಲ್ಲಿರಿ.
ನಾವು ಭೂಮಿತಾಯಿಯ ಮಡಿಲಿನಲ್ಲಿ ಸಲಹಲ್ಪಡುತ್ತಿದ್ದೇವೆ. ನಾವು ಸಹಜವಾಗಿಯೇ ಅವಳತ್ತ ಆದರಪೂರ್ವಕರಾಗಿರಬೇಕು.
ನಿಮ್ಮ ಮನಸ್ಸು ಒಂದು ಬೆಂಕಿಯ ಚೆಂಡಿದ್ದಂತೆ. ಅದನ್ನು ನೀವು ಸರಿಯಾಗಿ ಬಳಸಿಕೊಂಡರೆ, ಅದು ಸೂರ್ಯನಂತಾಗಬಲ್ಲದು.
ಭೌತಿಕ ಪ್ರಪಂಚದಲ್ಲಿ ಘಟಿಸುವ ಪ್ರತಿಯೊಂದು ವಿಷಯವೂ ಮೂಲತಃ ಒಂದು ರೀತಿಯ ಅಲೆ. ನೀವು ನಿಪುಣ ನಾವಿಕರಾಗಿದ್ದರೆ, ಪ್ರತಿಯೊಂದು ಅಲೆಯೂ ಒಂದು ಸಾಧ್ಯತೆ.
ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಡಿ. ನಿಮ್ಮ ವರ್ತಮಾನವನ್ನು ಚೆನ್ನಾಗಿ ನಿರ್ವಹಿಸಿ. ಭವಿಷ್ಯವು ತಾನಾಗೇ ಅರಳುತ್ತದೆ.
ನೀವು ಏನನ್ನು ಮಾಡುತ್ತೀರಿ ಎಂಬುದು ನನಗೆ ಮುಖ್ಯವಲ್ಲ. ಅದನ್ನು ನೀವು ಹೇಗೆ ಮಾಡುತ್ತೀರಿ ಎಂಬುದೇ ಜೀವನದ ಸಾರಸತ್ತ್ವ.
ನೀವು ಏನನ್ನೇ ಮಾಡಿದರೂ, ಇದನ್ನು ಪರಿಶೀಲಿಸಿಕೊಳ್ಳಿ – ನಿಮ್ಮ ಕಾರ್ಯವು ಕೇವಲ ನಿಮ್ಮ ಕುರಿತಾದುದೋ ಅಥವಾ ಅದು ಎಲ್ಲರ ಒಳಿತಿನ ಸಲುವಾಗಿಯೋ. ಒಳ್ಳೆಯ ಮತ್ತು ಕೆಟ್ಟ ಕರ್ಮದ ಕುರಿತಾದ ಎಲ್ಲ ಗೊಂದಲವನ್ನು ಇದು ನಿವಾರಿಸುತ್ತದೆ.